ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ನಮ್ಮ ದೇಶದಲ್ಲಿ ಪೆಟ್ರೋಲ್, ಡಿಸೆಲ್ ಆಮದಿನ ಮೇಲೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ವ್ಯಚ್ಚವಾಗುತ್ತದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ. ಇದಕ್ಕಿಂತಲೂ ಮಿಗಿಲಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯವನ್ನು ನಾವೇ ತಂದು ಕೊಂಡಂತಾಗುತ್ತದೆ. ಇದೆಲ್ಲ ಸಮಸ್ಯೆಗಳಿಗೆ ಮಾರ್‍ಗೋಪಾಯ ಕಂಡು ಹಿಡಿಯಲಾಗಿದೆ. ಪೆಟ್ರೋಲಿಯಂ ಇಂಧನಗಳ ಬದಲಿಗೆ ಸಸ್ಯಗಳಿಂದ ಉತ್ಪತ್ತಿಯಾಗುವ ಜೈವಿಕ ಇಂಧನವನ್ನು ಬಳಸುವುದು. ಹೀಗೆ ಹಲವಾರು ಸಸ್ಯಗಳ ಎಣ್ಣೆಗಳನ್ನು ಬದಲಿ ಇಂಧನವಾಗಿ ಬಳಸಬಹುದುದಾಗಿದೆ. ಇವುಗಳಲ್ಲಿ ಹೊಂಗೆ ಎಣ್ಣೆ ಪ್ರಮುಖವಾಗುತ್ತದೆ. ಬಹು ಉಪಯೋಗಿ ಹೊಂಗೆಮರ ರೈತರಿಗೆ ಉಪಕಾರಿಯಾಗಿದೆ. ಈ ಮರವು ದೇಶದೆಲ್ಲೆಡೆ ಬೆಳೆಯುತ್ತದೆ. ಹೆಚ್ಚಾಗಿ ಮಳೆ ಕಡಿಮೆ ಬೀಳುವ ಎಲ್ಲ ತರಹದ ಭೂಮಿಗಳಲ್ಲಿ ಹೇರಳವಾಗಿ ಹುಲುಸಾಗಿ, ಬೆಳೆಯುತ್ತದೆ. ಈ ಹೊಂಗೆಮರದ ಶಾಸ್ತ್ರೀಯ ಹೆಸರು “ಪೊಂಗೆಮಿಯಾ ಪಿನ್ನೇಟಿ” ಎಂದು ಕರೆಯುತ್ತಿದ್ದು, ಇದರ ಬೀಜದಿಂದ ಬರುವ ಎಣ್ಣೆಯನ್ನು ಸಾಂಪ್ರದಾಯಿಕ ದೀಪ ಬೆಳೆಗಿಸಲು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ. ಇದರ ಎಣ್ಣೆಯನ್ನು ಡಿಸೆಲ್‌ಗೆ ಬದಲಾಗಿ ಬಳಸುವ ಸಂಶೋಧನೆ ಯಶಸ್ವಿಯಾಗಿದೆ. ಜತೆಗೆ ದೇಶಿ ತಯಾರಿಕೆಯುಳ್ಳ ಬಹು ಉಪಯೋಗಿ ವಸ್ತು ಕೂಡ ಆಗಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಕಾರು, ಟ್ರಾಕ್ಟರ್, ಗಿರಣಿಗಳಿಗೆ ಈ ಎಣ್ಣೆಯನ್ನು ಹಾಕಿ ಓಡಿಸಬಹುದು. ಇದಕ್ಕೆ “ಜೈವಿಕ ಡಿಸೆಲ್” ಎಂದೇ ಕರೆಯುತ್ತಾರೆ.

ಈ ಹೊಂಗೆಮರಗಳನ್ನು ನಮ್ಮ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಬೆಳೆಸಬಹುದು. ದಾರಿಯುದ್ದಕ್ಕೂ ಹಾಕಬಹುದು. ಒಳ್ಳೆಯ ನೆರಳಿನ ಮರಕೂಡ. ಇದರ ಎಣ್ಣೆಯಿಂದ ಕೃಷಿ ಆಧಾರಿತ ಸಣ್ಣಸಣ್ಣ ಕೈಗಾರಿಕೆಗಳಿಗೆ ಉಪಯೋಗಿಸಲು ಇತ್ತೀಚೆಗೆ ಹೆಚ್ಚಿನ ಮಹತ್ವ ಬರುತ್ತಿದೆ.

ಡಿಸೆಲ್‌ಗೆ ಬದಲಾಗಿ ಈ ಎಣ್ಣೆಯನ್ನು ಬಳೆಸಿದರೆ ದುಬಾರಿ ಹಣ ನೀಡಿ, ಪೆಟ್ರೋಲ್ ಡಿಸೆಲ್‌ ತರಬೇಕಿಲ್ಲ. ಗ್ರಾಮೀಣ ಕೈಗಾರಿಕೆಗಳಲ್ಲಿಯೇ ಈ ಎಣ್ಣೆಯನ್ನು ತಯಾರಿಸಬಹುದು. ಕೃಷಿ ಕಾರ್‍ಯಗಳು ಸುಲಭವಾಗಿ, ಸಮಯ ಉಳಿಯುತ್ತದೆ. ಹೊಂಗೆ ಎಣ್ಣೆ ತೆಗೆದ ನಂತರ ಉಳಿಯುವ ಹೂಂಗೆಹಿಂಡಿ ಜಮೀನುಗಳಿಗೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಇಳುವರಿ ಕೂಡ ಹೆಚ್ಚಾಗುತ್ತದೆ. ಹೊಂಗೆ ಹಿಂಡಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ತೇವಾಂಶ ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ ಮತ್ತು ಮಣ್ಣಿನ ಸಂಪೂರ್‍ಣ ಆರೋಗ್ಯ ಕಾಪಾಡುತ್ತದೆ. ರಸಗೂಬ್ಬರಕ್ಕಾಗಿ ಮಾಡುತ್ತಿದ್ದ ವೆಚ್ಚ ಕಡಿಮೆಯಾಗುತ್ತದೆ.

ಹೊಂಗೆ ಎಣ್ಣೆಯಿಂದ ಉಗಳುವ ಹೊಗೆಯಲ್ಲಿ ವಿಷಾಧಾರಿತ ಆಮ್ಲಗಳು ಕಡಿಮೆ ಇರುತ್ತವೆ ಎಂದು ಕಂಡು ಹಿಡಿಯಲಾಗಿದೆ. ವಾಯುಮಾಲಿನ್ಯ ಕಡಿಮೆಯಾಗಿ ಆರೋಗ್ಯಕರ ಪರಿಸರ ನಿರ್‍ಮಾಣವಾಗುತ್ತದೆ. ಈ ಸತ್ಯವನ್ನು ನಮ್ಮ ವಿದ್ಯಾವಂತ ರೈತರು, ಪ್ರಗತಿಪರ ಕೃಷಿಕರು ಚಿಂತನೆ ಮಾಡಿ ಹೊಂಗೆ ಎಣ್ಣೆಯಿಂದಾಗುವ ಮಹತ್ವವನ್ನು ಅರಿಯಬೇಕಿದೆ. *****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾತರಗಿತ್ತಿಗೆ
Next post ಹಿಂಬಳಿ ಮುಂಬಳಿ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys